" ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಅತ್ಯಗತ್ಯ" - ವಿಜಯಲಕ್ಷ್ಮಿ ಸಿಬರೂರು
" ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಅತ್ಯಗತ್ಯ" - ವಿಜಯಲಕ್ಷ್ಮಿ ಸಿಬರೂರು " ಇಂದು ತನಿಖಾ ವರದಿಗೆ ಸಂಬಂಧಿಸಿದಂತೆ ಮಾಧ್ಯಮ ಸೇರುವ ಸಾಕಷ್ಟು ವರದಿಗಾರರು ವೃತ್ತಿಯಲ್ಲಿ ಬರುವ ಸವಾಲುಗಳನ್ನು ಪ್ರಾಯೋಗಿಕವಾಗಿ ಎದುರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಪತ್ರಿಕೋದ್ಯಮ ಸಂಬಂಧಿತ ಕಲಿಕೆಯ ಹಂತದಿಂದಲೇ ಅವರು ಪ್ರಾಯೋಗಿಕ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದು ಉತ್ತಮ " ಎಂದು ತನಿಖಾ ವರದಿಗಾರಿಕೆಯ ಹಿಂದಿರುವ ಸವಾಲುಗಳು ಕುರಿತ ಆನ್ ಲೈನ್ ಸಭೆಯೊಂದರಲ್ಲಿ ವಿಜಯಲಕ್ಷ್ಮಿ ಸಿಬರೂರು ತಿಳಿಸಿದರು. ಈ ಕಾರ್ಯಕ್ರಮವನ್ನು ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಲಾಗಿದ್ದು. ಸಭೆಯಲ್ಲಿ ಮಾತನಾಡಿದ ವಿಜಯಲಕ್ಷ್ಮಿ ಸಿಬರೂರು ಒಬ್ಬ ಉತ್ತಮ ತನಿಖಾ ವರದಿಗಾರನಾಗಲು ಕೇವಲ ಜ್ಞಾನ ಮತ್ತು ಕೌಶಲ್ಯ ವಿದ್ದರೆ ಸಾಲದು ಆತ ತನ್ನ ದೇಹದ ಮೇಲಿನ ಪ್ರೀತಿ ಹಾಗೂ ಜೀವದ ಮೇಲಿರುವ ಆಸೆಯನ್ನು ಸಹ ತ್ಯಜಿಸಿರಬೇಕು. ಅದಲ್ಲದೆ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ವೀಕ್ಷಕರು ಟಿ.ವಿ ಯಲ್ಲಿ ಪ್ರಸಾರ ವೀಕ್ಷಿಸುವಷ್ಟು ಸುಲಭವಲ್ಲ ವರದಿಯ ಸಂಗ್ರಹಣೆ. ಪ್ರತಿಯೊಂದು ತನಿಕಾ ವರದಿಯ ಹಿಂದೆ ಗೊಂದಲ ಹಾಗೂ ಮಾನಸಿಕ ಒತ್ತಡಗಳಿರುತ್ತವೆ. ಹಲವು ಬಾರಿ ತನಿಖೆಯ ಸಂಬಂಧ ನಾನು ಹಲ್ಲೆಗೆ ಒಳಗಾಗಿರುವು ಇದೆ. ವೃತ್ತಿಯ ಆರಂಭದಿಂದಲೂ ಕೆಲವು ಪ್ರಕರಣಗಳ ಪ್ರಸಾರಕ್ಕೆ